ಮಂಗಳವಾರ, ಅಕ್ಟೋಬರ್ 21, 2008

ಮರ್ಕಟ ಮನಸ್ಸು !

ಮನದ ಮಾಮರವೆಲ್ಲೋ ಕಂಪಿಸಿದ ಭ್ರಾಂತು...

ಶಿಶಿರನಾಗಮನದಿಂದ ಎಲೆಯುದುರಿ ನಿಂತಿದ್ದಕ್ಕೋ? 
ವಸಂತನಾಗಮನದಿಂದ ಮೈತುಂಬಿ ಬಂದದ್ದಕ್ಕೋ? 
ಕಾರಣವರಿಯೆನು! ನಿರಾಕಾರಣವಾಗಿ... 
ನಿರ್ವಿಕಾರಣವಾಗಿ... ನೀನು ನಿಂತು ತೂಗಿ... 

ಇಷ್ಟಿಷ್ಟೇ ಎನುವಷ್ಟು ತಂಪೆಲರ ಸೂಸಿದಂತಿದೆ... 
ಆ ತಂಗಾಳಿಯ ರಭಸಕ್ಕೆ ನಾನು ಸಿಲುಕಿ ನಲುಗಿದಂತಿದೆ! 
ಮತ್ತೆ ಮತ್ತೆ ನಗುವ ಆಸೆ ಮನದಿ ಚಿಗುರಿದಂತಿದೆ! 
ಆದರೇಕೋ ಪಾಪಿ ಮನಸು ಮತ್ತೇ ಸೋತು ಕುಳಿತಿದೆ...