ಬುಧವಾರ, ನವೆಂಬರ್ 12, 2008

ಮನದಂಗಳದಲ್ಲಿ ಒಂದು ಆಟ... ಭಾವನೆಗಳ ಹೊಯ್ದಾಟ

ಅಂತರಾಳ - ೧

ಲಗೋರಿ
.....
ಎಲ್ಲಾ ಏಟುಗಳಿಂದ ತಪ್ಪಿಸಿಕೊಂಡು, ಚೆಂಡಿನ ಹೊಡೆತಕ್ಕೆ ಚದುರಿ ಹಾರಿದ ಎಲ್ಲ ಕಲ್ಲುಗಳನ್ನು ಅಷ್ಟೇ ಶ್ರದ್ದೆ ಮತ್ತು ಉತ್ಸಾಹದಿಂದ ಹೆಕ್ಕಿ, ಅವಷ್ಟೂ ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಗೆದ್ದೇ ಅಂತ ಕೂಗಿ ಹೇಳಿದ ದನಿ. ಇನ್ನೇನು ಆ ದನಿ ಮಾರ್ದನಿಯಾಗಬೇಕು... ಆದರೆ ಜೊತೆಯಾಗಿ ಆಡಿ, ಪ್ರತಿ ಹೆಜ್ಜೆ ಹೆಜ್ಜೆಗೂ ಜೊತೆಗಿದ್ದವರು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿದು ವಿದಾಯ ಹೇಳಿ ಬಿಡುತ್ತಾರೆ...

ಮನಸ್ಸು ವಿಪರೀತವಾಗಿ ಹೆದರಿ, ನರಳಿ ಬಿಡುತ್ತೆ. ಮುಂದೆ ಏನು? ಅವರಿಲ್ಲದೆ ಈ ಆಟ ಹೇಗೆ? ಇನ್ನು ಮತ್ತೆ ಗೆದ್ದು ಲಗೋರಿ ಎಂದು ಕೂಗುವುದೆಂದು... ಅಸಲಿಗೆ ಗೆಲ್ತೀನ??? ನೂರು ಪ್ರಶ್ನೆಗಳ ಹಾದಿಗೆ... ಮೂರು ದೂರದ ಉತ್ತರ...

ಇದನ್ನ ಓದಿದವರ ಮನಸ್ಸಿನ್ನಲ್ಲಿ ಒಂದು ಪ್ರೇಮ ವೈಫಲ್ಯದ ಸ್ನಿಗ್ಧ ಚಿತ್ರಣ ಕಂಡು ಬರಬಹುದು. ಆದರೆ ಇಲ್ಲಿ ನಾನು ಬರೆಯುತ್ತಿರೋದು ಹಠಾತ್ತನೆ ನಮ್ಮಿಂದ, ನಮ್ಮ ಬದುಕಿಂದ ದೂರವಾಗಿ ಹೋಗುವವರ ಬಗ್ಗೆ, ಕೇವಲ ಒಬ್ಬ ಪ್ರೇಮಿ, ಒಬ್ಬಳು ಪ್ರೇಯಸಿಯ ಬಗ್ಗೆಯಲ್ಲ. ಇಂದೆಲ್ಲಾ ಜೊತೆಯಾಗಿದ್ದು ನಾಳೆಯೆಂಬ ಹೊಸ ದಿನದ ಹೊಸ್ತಿಲಿನಲ್ಲಿ ಅನಿಶ್ಚಿತತೆಯ ಸುಳಿಗೆ ಸಿಲುಕಿ ಮರೆಯಾಗುವ ಗೆಳೆಯರ ಬಗ್ಗೆ, ಬಾಲ್ಯದಿಂದಲೂ ತುಂಬ ಅಕ್ಕರೆಯಿಂದ ನೀನು ಹೀಗಿರಬೇಕು-ಹಾಗಿರಬೇಕು ಎಂದು ಹುರಿದುಂಬಿಸಿ, ಪ್ರೋತ್ಸಾಹಿಸಿ, ನಮ್ಮನ್ನು ಸಲಹಿ ಇನ್ನೇನು ನಾನು ಚೆನ್ನಗಿರ್ತೀನಿ ಅಂತ ನಿರ್ಧರಿಸುವ ಹೊತ್ತಿಗೆ ಸರಿಯಾಗಿ ತಮಗೆ ತಡವಾಯ್ತು, ಎಂಬಂತೆ ಬದುಕ ಪಯಣವ ಮೊಟಕುಗೊಳಿಸಿ ಹೊರಟು ನಡೆವ ನಮ್ಮ ಹಿರಿಯ ಜೀವಗಳ ಬಗ್ಗೆ. ಹೀಗೆ ನಮ್ಮ ಪ್ರೀತಿಪಾತ್ರರು ನಮ್ಮನ್ನು ಅಗಲಿ ಹೋದಾಗ ಮನಸ್ಸೆಲ್ಲ ಅನಾಥ, ಬದುಕು ಒಂಟಿ ಒಂಟಿ, ನಡೆವ ದಾರಿಯಲ್ಲಿ ಒಬ್ಬಂಟಿ ಪಯಣಿಗರು ನಾವಾಗ. ಬಿಟ್ಟು ಹೋದವರನ್ನು ಮತ್ತೆ ಕೂಗಿ ಕೇಳಬೇಕೆನಿಸುತ್ತದೆ "ಮತ್ತೆ ಹಿಂತಿರುಗಿ ಬರಲಾರಿರ ನೀವೆಂದು".

ಮತ್ತೆ ಬದುಕು ನಡೆಯಲೇ ಬೇಕು, ನಮ್ಮವರ ಕನಸುಗಳ ಶಿಖರದ ಕಾಮಗಾರಿ ಮುಂದುವರಿಯಲೇ ಬೇಕು. ಕೊನೆಗೆ ನಮಗೋಸ್ಕರವಾಗಿಯಾದರು ಈ ಪಯಣ ಮುಂದುವರಿಯಬೇಕು (ಏಕೆಂದರೆ ಇಡಿ ಬದುಕ ಅಸ್ತಿತ್ವ ನಿಲ್ಲುವುದು ನಮ್ಮ ಸ್ವಾರ್ಥದ ಮೇಲೆ). ಹೊರಟು ನಡೆದವರ ದಾರಿಗೆ ಹೂಮಳೆಗರೆದು, ನಮಸ್ಕರಿಸಿ, ಇಷ್ಟು ದಿನ ಬದುಕ ಬದುಕಾಗಿದ್ದದ್ದಕ್ಕೆ ವಂದಿಸಿ ಬದುಕಿನೆಡೆಗೆ ಮುಖ ಮಾಡಿ ಹೊರಟ ಹಾಗೆ. ನಿಜಕ್ಕೂ ಈ ಬದುಕು ಎಂತೆಂತ ಅನುಭವಗಳನ್ನು ಕಣ್ಣೆದುರಿಗೆ ತಂದು ಕೆಡವಿ, ಅನುಭವಿಸು ಎಂದು ಹೇಳಿ ಎದ್ದು ನಡೆಯುತ್ತೆ. ಅದೆಲ್ಲವನ್ನೂ ಅತ್ಯಂತ ಮುತುವರ್ಜಿಯಿಂದ ಆರಿಸಿಕೊಂಡು, ನಮ್ಮ ಕನಸಿನ ಜೊತೆ ಪೋಣಿಸಿಕೊಂಡು ಮುದ್ದಾದ ಹಾರವನ್ನಾಗಿಸಿ ಕೊಂಡು, ಅದನ್ನ ಧರಿಸಿ ಮುನ್ನಡೆಯ ಬೇಕಾದವರು ನಾವು. ಆ ಹಾರ ಎಷ್ಟು ದಿನ, ಎಲ್ಲಿಯವರೆಗೆ ನಮ್ಮ ಬಳಿ ಉಳಿಯುತ್ತೆ ಎನ್ನುವುದು ನಮ್ಮ ಮನೋಬಲದ ಮೇಲೆ ನಿರ್ಧರಿತ. ಉಳಿಸಿಕೊಂಡರೆ ಕೊನೆ ತನಕ, ಕಳೆದುಕೊಂಡರೆ ಜೊತೆ ಇದ್ದ ತನಕ, ಆದರೆ ಈ ಪಯಣದ ಹಾದಿಯಲ್ಲಿ ಅದನ್ನ ಕಾಪಾಡಿ, ಆದರಿಸಿ, ಹಾಗು ರಕ್ಷಿಸಿಕೊಂಡ ತೃಪ್ತಿಯಿರಬೇಕು, ಕೊನೆಗೊಂದು ದಿನ ಅನಿವಾರ್ಯವಾಗಿ ಕಳೆದುಕೊಂಡರೆ ಅದರಲ್ಲಿ ನನ್ನ ತಪ್ಪಿಲ್ಲ ಎನ್ನುವಷ್ಟು ಮನಸ್ಸು ನಿರ್ಮಲವಾಗಿರಬೇಕು, ಇಲ್ಲದಿದ್ದರೆ ಮನಸ್ಸು ಮೈಲಿಗೆ ಎನ್ನಿಸಿಕೊಳ್ಳುತ್ತದೆ, ಹಾಗಾಗಬಾರದಷ್ಟೇ.

ಪ್ರೀತಿಯೆಂದಿಗು ಸಾಯುವುದಿಲ್ಲ, ಬದುಕ ಕಾರಣಗಳಿಗೆ ಸಿಕ್ಕಿ ನಲುಗಿ ಮರೆಯಾಗಬಹುದು, ಆದರೆ ಎಂದೆಂದಿಗೂ ಮರೆಯಲಾಗುವುದಿಲ್ಲ. ಕಳೆದುಕೊಂಡಿದ್ದು ಮತ್ತೆ ಸಿಗಬಹುದು, ಸಿಕ್ಕಿದ್ದು ಮತ್ತೆ ಕಳೆದುಹೋಗಬಹುದು. ಮನಸ್ಸು ಗಟ್ಟಿಯಿರಲಿ, ಆದರೆ ಕಲ್ಲಾಗದಿರಲಿ.

ಮತ್ತೆ ಕನಸುಗಳೆಂಬ ಕಲ್ಲುಗಳನ್ನು ಎದುರಾಳಿಯ ಚೆಂಡಿನ ಹೊಡೆತಕ್ಕೆ ಸಿಲುಕದೆ ಹೆಕ್ಕಿ, ಜೋಡಿಸಿ ಮತ್ತೆ ಜೋರಾಗಿ ಲಗೋರಿ ಎಂದು ಕೂಗಿ, ವಿಜಯ ದುಂಧುಬಿ ಮೊಳಗಿಸ ಬೇಕಾಗಿದೆ, ಸರಿ ನಾನು ಹೊರಟೆ ಆಟಕ್ಕೆ ತಡವಾಯ್ತು... ಮತ್ತೆ ಸಿಕ್ತೀನಿ ಆಟ ಗೆದ್ದ ನಂತರ.

6 ಕಾಮೆಂಟ್‌ಗಳು:

I am Naveen ಹೇಳಿದರು...

Very nice post..........I like the lines
"ಮತ್ತೆ ಕನಸುಗಳೆಂಬ ಕಲ್ಲುಗಳನ್ನು ಎದುರಾಳಿಯ ಚೆಂಡಿನ ಹೊಡೆತಕ್ಕೆ ಸಿಲುಕದೆ ಹೆಕ್ಕಿ, ಜೋಡಿಸಿ ಮತ್ತೆ ಜೋರಾಗಿ ಲಗೋರಿ ಎಂದು ಕೂಗಿ, ವಿಜಯ ದುಂಧುಬಿ ಮೊಳಗಿಸ ಬೇಕಾಗಿದೆ".I Like your positive thinking.

naveen

ಅನಾಮಧೇಯ ಹೇಳಿದರು...

Nice One. Keep on writing.
Write about the impressed personalities of whom you were met till today in your view honestly.

Try to write in different subjects also which are new and unique

ಅನಾಮಧೇಯ ಹೇಳಿದರು...

Rajesh...all articles and kavanas are nicely expressed...you write like a professional writer...very good keep it up!!

ಅನಾಮಧೇಯ ಹೇಳಿದರು...

nammanna mari beDappa
beLeva siri maLokeyalli adakke modale heLi biDodu, amele sikthiyo ilvo yarige gotthu...
okay, enough, yella thumba chennagiddave... kannada vara pathrike gaLige kaLisu...

Rajendra ಹೇಳಿದರು...

Hi Rajesh......
tumba chennagi baritidya.. Keep it up man......

ಅನಾಮಧೇಯ ಹೇಳಿದರು...

very nice and meaningful rajesh.......
nimma ella postgalalli oduttirabekadare padagalanna use madkoltiralwa aa kale tumba chennagide.... mini dictionary ri neevu.. heege baritiri... very nice article....